Kpscvani

educational ,employment ,health,sports,political news and other information


Tuesday, March 1, 2022

Navodaya Vidyalaya question paper

  shekharagouda       Tuesday, March 1, 2022

                ವಿಭಾಗ II ಭಾಷಾ ಪರೀಕ್ಷೆ 

                         ವಾಕ್ಯಾವಳಿ -1
 
ನೊರೆನ್ ಕಸಿನ್ಸ್ ಒಬ್ಬ ಪ್ರಸಿದ್ಧ ಲೇಖಕರಲೊಬ್ಬರು.
ಇವರಿಗೆ ಒಮ್ಮೆ ಅರೇಷನ್ ಆಗಬೇಕಾಯಿತು. ಆಗ ಇವರು ತಮ್ಮ ಬೆಡ್ಡಿನ ಬಳಿಯ ವೀಡಿಯೋ ಕ್ಯಾಸೆಟ್ ಚಿತ್ರಗಳನ್ನು ಮತ್ತೆ ಮತ್ತೆ ನೋಡಿ ನಲಿದರು. ಅವರು ಅದ್ಯಕರ ರೀತಿಯಲ್ಲಿ ಬಹುಬೇಗ ಗುಣಮುಖರಾದರು. ಹಾಸ್ಯ ಮದ್ದಾಗಿ ಮಾಡುವ ಪರಿಣಾಮವನ್ನು ಕಂಡು ಸ್ವತಃ ಡಾಕ್ಟ‌ಗಳೇ ಅಚ್ಚರಿಗೊಂಡು ಕೊಂಡಾಡಿದರು. ನಗೆ ಮುಖದ ಬಿಗಿಗಳನ್ನು ಕಳಚುತ್ತದೆ. ನಗೆ ಆರೋಗ್ಯ ವರ್ಧಕವೂ ಆಗಿದೆ ಎಂಬುದನ್ನು ಕಂಡುಕೊಂಡರು.

51) ಯಾರಿಗೆ ಅವರೇಷನ್ ಆಯಿತು?

1) ಡಾಕ್ಷರರಿಗೆ

2) ಚಾರಿ ಚಾಪ್ಲಿನ್‌ರಿಗೆ

3) ನೋರನ್ ಕಸಿನ್ಸ್‌ರಿಗೆ 4) ಕ್ಯಾಸೆಟರಿಗೆ

52) ಲೇಖಕರಿಗೆ ಆಪರೇಷನ್ ಆದಾಗ ಬಹುಬೇಗ

ಗುಣಮುಖರಾದದ್ದು 1) ಔಷಧೋಪಚಾರದಿಂದ

2) ವೈದ್ಯರ ಆರೈಕೆಯಿಂದ

3) ವೀಡಿಯೋ ಕ್ಯಾಸೆಟ್‌ ದಿಂದ

4) ನಗೆಯಿಂದ

53) ನಗೆ ಇದನ್ನು ಮಾಡದು ?

1) ಮುಖದ ಬಿಗಿಗಳನ್ನು ಕಳಚುತ್ತದೆ.

2) ಆರೋಗ್ಯ ವರ್ಧನೆ ಮಾಡುತ್ತದೆ.

3) ರೋಗಗಳನ್ನು ನಿವಾರಿಸುತ್ತದೆ.

4) ವೀಡಿಯೋ ಕ್ಯಾಸೆಟ್‌ನ್ನು ತಯಾರಿಸುತ್ತದೆ.

54) ನೋರನ್ ಕಸಿನ್ಸ್ ಯಾರ ವೀಡಿಯೋ ಕ್ಯಾಸೆಟ್‌ನ್ನು ನೋಡಿದರು ?

1) ಚಾರಿ ಚಾಪ್ಲಿನ್‌

2) ಡಾಕ್ಟರರ

3) ಪ್ರಸಿದ್ಧ ಲೇಖಕರ

4) ಆರೋಗ್ಯ ವರ್ಧಕರ

55) 'ಹಾಸ್ಯಭರಿತ ಕ್ಯಾಸೆಟ್‌ಗಳನ್ನು ನೋಡುತ್ತಾ ಕಸಿನ್ಸ್ ಆಶ್ಚರ್ಯಕರ ರೀತಿಯಲ್ಲಿ ಬಹುಬೇಗ ಗುಣ ಮುಖರಾದರು' ಇದರಿಂದ ಡಾಕ್ಟರರು ಕಂಡುಕೊಂಡಿದ್ದು

1) ಹಾಸ್ಯವು ಚಾರಿ ಚಾಪ್ಲಿನ್‌ ಚಿತ್ರಗಳಿಂದ ದೊರೆಯುತ್ತದೆ

2) ಹಾಸ್ಯವು ಒಂದು ಮದ್ದು

3) ಪ್ರತಿ ರೋಗಿಯ ಬೆಡ್ಡಿನ ಬಳಿ ವೀಡಿಯೋ ಕ್ಯಾಸೆಟ್ ಇಡುವುದು ಒಳ್ಳೆಯದು.

4) ಲೇಖಕರಿಗೆ ವೀಡಿಯೋ ಕ್ಯಾಸೆಟ್ ಮೂಲಕ ವೈದ್ಯಕೀಯ ಚಿಕಿತ್ಸೆ ಕೊಡಬಹುದು.

                    ವಾಕ್ಯಾವಳಿ - 2

ಭೂಮಿಯ ಸುತ್ತುಮದ ಪ್ರದೇಶವೇ ವಾತಾವರಣ ಹವೆಯು ಅವಕಾಶವನ್ನು ವ್ಯಾಪಿಸಿದೆ. ನನಗೆ ನಿರ್ದಿಷ್ಟವಾದ ತೂಕವಿದೆ. ಇದು ಒತ್ತಡವನ್ನು ಹಾಕುವುದು, ಹವೆಯ ಒತ್ತಡವು ದ್ರವವನ್ನು ಚಲಿಸುವಂತೆ ಮಾಡುತ್ತದೆ. ನಮ್ಮ ಸುತ್ತ ಹವೆಯ ಒತ್ತಡವಿದ್ದರೂ ನಮಗೆ ಅದರ ಅನುಭವವಾಗುವುದಿಲ್ಲ. ಹವೆಯು ಅನೇಕ ಅನಿಲಗಳ ಮಿಶ್ರಣವಾಗಿದೆ. ಸಾರಜನಕ ಹಾಗೂ ಆಮ್ಲಜನಕ ಅಧಿಕ ಪ್ರಮಾಣದಲ್ಲಿ ಇವೆ. ದಹನಕ್ಕೆ ಹಾಗೂ ಉಸಿರಾಟಕ್ಕೆ ಆಮ್ಲಜನಕ ಅವಶ್ಯ.

56) ಅನೇಕ ಅನಿಲಗಳ ಮಿಶ್ರಣವು

1) ಹವ

3) ಆಮ್ಲಜನಕ

2) ವಾತಾವರಣ 4) ಸಾರಜನಕ

57) ಈ ಅನಿಲವು ದಹನಕ್ಕೆ ಸಹಕಾರಿ

1) ಮಿಶ್ರ ಅನಿಲ

2) ಆಮ್ಲಜನಕ

3) ಸಾರಜನಕ

4) ಒತ್ತಡವುಳ್ಳ ಅನಿಲ

58) ಈ ವಾಕ್ಯಾವಳಿಯಲ್ಲಿ ತಿಳಿಸಿದ ವಾಕ್ಯ ಇದು ಆಗಿದೆ.

1) ಹವೆಗೆ ಒತ್ತಡ ಮತ್ತು ತೂಕ ಇದೆ.

2) ಅನಿಲಗಳ ಅನುಭವ ನಮಗೆ ಆಗುವುದಿಲ್ಲ

3) ಹವೆಯ ಮಿಶ್ರಣದಲ್ಲಿ ವಾತಾವರಣವಿದೆ

4) ಸಾರಜನಕ ಮತ್ತು ಆಮ್ಲಜನಕ ಅನಿಲಗಳು ದಹನಕ್ಕೆ ಮತ್ತು ಉಸಿರಾಟಕ್ಕೆ ಅವಶ್ಯ.

59) .ಈ ಗದ್ಯಭಾಗದಲ್ಲಿ  ಕಾಣಸಿಗದ ವಾಕ್ಯ ಇದಾಗಿದೆ.

1) ನಮ್ಮ ಸತ್ತಮುತ್ತ ಅನಿಲದ ಒತ್ತಡವಿದ್ದರೂ

ನಮಗೆ ಅದರ ಅನುಭವವಾಗುವುದಿಲ್ಲ

2) ನಮ್ಮನ್ನು ಸುತ್ತುವರೆದ ಪ್ರದೇಶವೇ

3) .ಅನಿಲವು ಅವಕಾಶವನ್ನು ವ್ಯಾಪಿಸಿದೆ.

1) ದ್ರವದ ಒತ್ತಡವ ಹನೆಯನ್ನು ಚಲಿಸುವಂತೆ

ಮಾಡುತ್ತದೆ.

60) ಈ ಗದ್ಯಭಾಗಕ್ಕೆ ಸೂಕ್ತ ಹೆಸರು

 1) ಆಮ್ಲಜನಕ ಮತ್ತು ಸಾರಜನಕ

3) ವಾತಾವರಣ

4) ಸುತ್ತಮುತ್ತ

                     ವಾಕ್ಯಾವಳಿ -3

ಒಮ್ಮೆ ಭರತ ಚಕ್ರವರ್ತಿ ಊಟಕ್ಕೆ ಕುಳಿತಿದ್ದನು. ರಾಣಿ ಸುಭದ್ರೆ ಬಡಿಸುತ್ತಿದ್ದಳು. ಇದ್ದಕ್ಕಿದ್ದಂತೆ ಚಕ್ರವರ್ತಿ ಕಣ್ಣು ಮುಚ್ಚಿ ಕುಳಿತ. ರಾತ್ರಿ ನಿದ್ದೆ ಸರಿಯಾಗಿ ಬಂದಿಲ್ಲವೆಂದು ತೋರುತ್ತದೆ. ಆದುದರಿಂದ ಈ ಊಟದ ನಡುವೆ ನಿದ್ರಿಸಿರಬಹುದು' ಎಂದು ಸುಭದ್ರೆ ಭಾವಿಸಿದಳು. ಸ್ವಲ್ಪ ಹೊತ್ತಾದ ಬಳಿಕ - ಚಕ್ರವರ್ತಿ ಕಣ್ಣು ತೆರೆದು ಊಟ ಮಾಡಲು ತೊಡಗಿದ. 'ರಾತ್ರಿ ನಿದ್ದೆ ಮಾಡಲಿಲ್ಲವೇ ?' ಎಂದು ಸುಭದ್ರೆ ಪ್ರಶ್ನಿಸಿದಳು. `ಮಾಡಿದ್ದೆ' ಎಂದನು. ಚಕ್ರವರ್ತಿ, 'ಹಾಗಾದರೆ ಊಟದ ಮಧ್ಯೆ ಕಣ್ಣುಮುಚ್ಚಿ ಕುಳಿತಿರೇಕೆ ?' ಎಂದಳು. ಅದಕ್ಕೆ ಭರತ ಚಕ್ರವರ್ತಿ ಹೇಳಿದ - ““ಹೌದು, ನಾನು ನನ್ನ ಆತ್ಮನಿಗೆ ಊಟ ಮಾಡಿಸುತ್ತಿದ್ದೆ. ಅವನಿಗೆ ಈ ಪಾಯಸ, ಪಂಚಾಮೃತ ಬೇಡ, ಧ್ಯಾನಾಮೃತವೇ ಆತ್ಮನಿಗೆ ಹಿತ ಮಾಡತಕ್ಕದ್ದು. ಅದಗೋಸ್ಕರ ನನ್ನ ಆತ್ಮನಿಗೆ ಧ್ಯಾನಾಮೃತ ಕುಡಿಸುತ್ತಿದ್ದೆ.'

61) ಭರತ ಚಕ್ರವರ್ತಿ ಕಣ್ಣು ಮುಚ್ಚಿ ಕುಳಿತು

1) ನಿದ್ದೆ ಮಾಡುತ್ತಿದ್ದ

2) ತೂಕಡಿಸುತ್ತಿದ್ದ

3) ಧ್ಯಾನಾಮೃತ ಮಾಡುತ್ತಿದ್ದ

4) ಆತ್ಮನಿಗೆ ಧ್ಯಾನಾಮೃತ ಕುಡಿಸುತ್ತಿದ್ದ

62) ಚಕ್ರವರ್ತಿಯು ಧ್ಯಾನ ಮಾಡಿದ್ದು

1) ಊಟದ ನಂತರ

2) ಊಟವಾದ ಬಳಿಕ 3) ಊಟಕ್ಕಿಂತ ಮುಂಚೆ

4) ಊಟ ಮಾಡುತ್ತಾ

63) ವಾಕ್ಯಾವಳಿಯಲ್ಲಿ ಈ ವಾಕ್ಯ ಕಾಣಸಿಗುವುದು

 1) .ಆತ್ಮನಿಗೆ ಎಧ್ಯಾನಾಮೃತ ಹಿತಕರವಾದದ್ದು

2) ಆತ್ಮನಿಗೆ ಪಂಚಾಮೃತ ಹಿತಕರವಾದದ್ದು

3) ಆತ್ಮನಿಗೆ ಪಂಚಾಮೃತ ಊಟ

ಮಾಡಿಸತಕ್ಕದ್ದು

4) ಊಟ ಮಾಡುತ್ತಾ ಧ್ಯಾನ ಮಾಡಿದರೆ

ಆರೋಗ್ಯ ಸುಧಾರಿಸುತ್ತದೆ.

64) ರಾಣಿ ಸುಭದ್ರೆಯ ಶ್ರಾಂತಿ ಯಾವುದು?

2) ಭರತನು ಆತ್ಮನಿಗೆ ಧ್ಯಾನಾಮೃತ ಕುಡಿಸುತ್ತಿರಬಹುದು

ರುಚಿಸಿರಲಿಕ್ಕಿಲ್ಲ

4) ಭರತನಿಗೆ ಕಣ್ಣು ತೆರೆದು ಊಟ ಮಾಡಿದರೆ

ಊಟ ರುಚಿಸಲಿಕ್ಕಿಲ್ಲ.

1) ಭರತನು ರಾತ್ರಿ ನಿದ್ರೆ ಮಾಡಿರಲಿಕ್ಕಿಲ್ಲ

65) ಗುಂಪಿಗೆ ಸೇರದ ಪದ -

1) ಪಂಚಾಮೃತ 3) ಆತ್ಮಾಮೃತ

2) ಧ್ಯಾನಾಮೃತ

                    ವಾಕ್ಯಾವಳಿ- 4
ಹನುಮಂತನು ಸೀತಾ ವೃತ್ತಾಂತವನ್ನು ರಾಮನಿಗೆ ತಿಳಿಸಿದ ಮೇಲೆ ರಾಮರಾವಣರಿಗೆ ಘನಘೋರ ಸಂಗ್ರಾಮವಾಯಿತು. ಈ ಯುದ್ಧ ಸತ್ಯ ಮತ್ತು ಅಸತ್ಯದ ಮಧ್ಯೆ ಹಾಗೂ ನೀತಿ ಮತ್ತು ಆನೀತಿಯ ಮಧ್ಯೆ ನಡೆದ ಯುದ್ಧವಾಗಿತ್ತು. ರಾವಣ ಕೊಲ್ಲಲ್ಪಟ್ಟ, ಯುದ್ಧ ರಂಗಕ್ಕೆ ಶ್ರೀರಾಮ ಬಂದ, ಜೊತೆಯಲ್ಲಿ ವಿಭೀಷಣ ಮತ್ತು ಅನೇಕ ಅಧಿಕಾರಿಗಳಿದ್ದರು. ರಾವಣನ ಶವವನ್ನು ನೋಡಿ ಕೆಲವರು ಸಿಟ್ಟಿನಿಂದ ತುಳಿಯಲು ಹೋದರು. ಆಗ ಶ್ರೀರಾಮ ಅವರನ್ನು ತಡೆದು ಹೇಳಿದ ಇಕ್ಷಾಕು ವಂಶದವರಾದ ನಾವು ಇಷ್ಟ ಸಿದ್ಧಿಯಾದ ಬಳಿಕ ವೈರತ್ವವಿಟ್ಟುಕೊಳ್ಳುವುದಿಲ್ಲ. ಈಗ ರಾವಣನು ವಿಭೀಷಣನಿಗೆ ಮಾತ್ರವಲ್ಲ, ನನಗೂ ಹಿರಿಯಣ್ಣನ ಸಮಾನ'' ಶ್ರೀರಾಮನ ಅಂತರಂಗವನ್ನು ತಿಳಿದ ರಾವಣನ ಮಡದಿ ಮ೦ಡೋದರಿ ಆತನ ಚರಣಗಳಿಗೆರಗಿ ಅವನ ಭಕ್ತಳಾದಳು.
66) 'ಆತನ ಚರಣಗಳಿಗೆರಗಿ ಅವನ ಭಕ್ತಳಾದಳು' ಇಲ್ಲಿ 'ಆತನ' ಅಂದರೆ

1) ಶ್ರೀರಾಮನ 2) ಸೀತೆಯ

3) ರಾವಣನ

4) ವಿಭೀಷಣನ

ಯಾವಾಗ

67) ರಾಮ-ರಾವಣರ ಯುದ್ಧವು ಆಯಿತು?

1) ಸತ್ಯ ಮತ್ತು ಅಸತ್ಯ ತಾಂಡವವಾಡಿದ

ಮೇಲೆ 2) ನೀತಿ ಮತ್ತು ಅನೀತಿಯ ಮಧ್ಯ ಸಂಘರ್ಷ

ವಾದ ಮೇಲೆ

3) ರಾವಣನು ಯುದ್ಧದಲ್ಲಿ ಕೊಲ್ಲಲ್ಪಟ್ಟ ಮೇಲೆ 4) ಹನುಮಂತನು ಸೀತೆಯ ಬಗ್ಗೆ ರಾಮನಿಗೆ

ತಿಳಿಸಿದ ಮೇಲೆ

68) ಇಕ್ಷಾಕು ವಂಶದವರ ಗುಣ ವಿಶೇಷ ಯಾವುದು ? 1) ರಾವಣನ ಶವವನ್ನು ನೋಡಿ ತುಳಿಯುವುದು

2) ರಾವಣನ ಶವವನ್ನು ಹಿರಿಯಣ್ಣನೆಂದು

ತಿಳಿಯುವುದು

3) ಶವವನ್ನು ತುಳಿಯುವವರನ್ನು ಬಿಡಿಸುವುದು 4) ಇಷ್ಟಸಿದ್ಧಿಯಾದ ಮೇಲೆ ವೈರತ್ವವಿಟ್ಟುಕೊಳ್ಳ ದಿರುವುದು.

69) ರಾಮ ರಾವಣರ ಯುದ್ಧದ ಪರಿಣಾಮವೇನು ? 1) ಶ್ರೀರಾಮನಿಗೆ ಜಯ

2) ರಾವಣನು ಶ್ರೀರಾಮನಿಗೆ ಶರಣಾದದ್ದು

3) ಮಂಡೋದರಿ ಶ್ರೀರಾಮನಿಗೆ ಶರಣಾದದ್ದು

4) ವಿಭೀಷಣನಿಗೆ ಜಯ

70) 'ಈಗ ರಾವಣನು ವಿಭೀಷಣನಿಗೆ ಮಾತ್ರವಲ್ಲ,

ನನಗೂ ಹಿರಿಯಣ್ಣನಿಗೆ ಸಮಾನ' ಎನ್ನುವಲ್ಲಿ ಶ್ರೀರಾಮನ ಈ ಗುಣ ಪ್ರದರ್ಶಿತವಾಗುತ್ತದೆ.

1) ನ್ಯಾಯ ನಿಷ್ಠೆ

2) ದೊಡ್ಡತನ

3) ದಡ್ಡತನ

4) ಹೇಡಿತನ

                   ವಾಕ್ಯಾವಳಿ - 5

“ಪ್ರತಿಭಾವಂತರಿಗೆ ಸ್ಮರಣಶಕ್ತಿ ಸ್ವಲ್ಪ ಕಡಿಮೆ ಅ೦ದವರು ನೀವೇ ಅಲ್ಲವೇ ? ಜಾರ್ಜ ಬರ್ನಾರ್ಡ್ ಶಾರಿಗೆ ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದರು. ಬರ್ನಾರ್ಡ್ ಶಾರಿಂದ ಥಟ್ಟನೆ ಉತ್ತರ ಬಂತು. ನನಗೆ ನೆನಪಿಲ್ಲ

71) ಜಾರ್ಜ ಬರ್ನಾರ್ಡ್‌ಶಾರ ಪ್ರಕಾರ ಯಾರಿಗೆ ಸ್ಮರಣ ಶಕ್ತಿ ಕಡಿಮೆ

1) ಓದಿದವರಿಗೆ

( 2) ಪ್ರತಿಭಾವಂತರಿಗೆ

3) ಅಭಿಮಾನಿಗಳಿಗೆ

4) ನೆನಪಿರದವರಿಗೆ

72) ಬರ್ನಾರ್ಡ್ ಶಾರಿಗೆ ಯಾರು ಪ್ರಶ್ನಿಸಿದರು?

1) ಪ್ರತಿಭಾವಂತ

2) ಸ್ಮರಣಶಕ್ತಿ ಕಡಿಮೆ ಇದ್ದ ವ್ಯಕ್ತಿ

3) ಅಭಿಮಾನಿಯೊಬ್ಬರು

4) ಇಂಗ್ಲೆಂಡಿನ ಜನರು 73) ಈ ವಾಕ್ಯಾವಳಿಯ ಪ್ರಕಾರ ಬರ್ನಾರ್ಡ್ ಶಾ ಒಬ್ಬ

1) ಪ್ರತಿಭಾವಂತ

2) ಸ್ಮರಣ ಶಕ್ತಿ ಹೆಚ್ಚಿಗಿದ್ದ ವ್ಯಕ್ತಿ

3) ಬರಹಗಾರ

4) ಲೇಖಕ 74) 'ನನಗೆ ನೆನಪಿಲ್ಲ'' ಎನ್ನುವಲ್ಲಿ ಬರ್ನಾರ್ಡ್

1) ತಾವೊಬ್ಬ ಪ್ರತಿಭಾವಂತ ಎನ್ನುವುದನ್ನು

ತೋರಿಸಿಕೊಟ್ಟರು.

2) ತಮಗೆ ಅಭಿಮಾನಿಗಳು ಬಹಳ ಎನ್ನುವುದನ್ನು ತೋರಿಸಿಕೊಟ್ಟರು.

3) ತಮಗೆ ವಿರೋಧಿಗಳಿಲ್ಲ ಎಂದು ನಗೆಯಾಡಿದರು.

4) ತಮಗೆ ಥಟ್ಟನೆ ಉತ್ತರ ಕೊಡಲು ಬರುವುದೆಂಬುದನ್ನು ತೋರಿಸಿದರು.

75) ಈ ವಾಕ್ಯಾವಳಿಯಲ್ಲಿ ಹೇಳದೇ ಬಿಟ್ಟಿರುವ ವಾಕ್ಯ ಇದಾಗಿದೆ

1) ಪ್ರತಿಭಾವಂತರಿಗೆ ಸ್ಮರಣಶಕ್ತಿ ಕಡಿಮೆ

2) ಬರ್ನಾರ್ಡ್ ಶಾ ಒಬ್ಬ ಪ್ರತಿಭಾವಂತ ವ್ಯಕ್ತಿ

3) ಬರ್ನಾರ್ಡ್ ಶಾ ಅವರಿಗೆ ಸ್ಮರಣಶಕ್ತಿ ಕಡಿಮೆ

4) ಬರ್ನಾರ್ಡ್ ಶಾರಿಗೆ ಸ್ಮರಣ ಶಕ್ತಿ ಹೆಚ್ಚು.
 
ಬುದ್ದಿ ಮಾಪನ ಪ್ರಶ್ನೆ ಪತ್ರಿಕೆ ಗಣಿತ ಹಾಗೂ ಭಾಷೆ ಪರೀಕ್ಷೆ ಪತ್ರಿಕೆ pdf file ಪಡೆಯಲು ಕೆಳಗಿನ ಲಿಂಕ್ ಒತ್ತಿ 👇  👇   👇   👇   👇   👇   👇     👇   👇  👇   👉 👉 👉 👉 👉👉 pdf file ಇಲ್ಲಿ  ಒತ್ತಿ 
logoblog
Previous
« Prev Post

No comments:

Post a Comment